ಅಡಿಕೆಯಲ್ಲಿ ಹರಳು ಉದುರಿ ಇಳುವರಿ ಕುಂಠಿತವಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ…
Follow us ಅಡಿಕೆಯಲ್ಲಿ ಹರಳು ಉದುರಲು ಕಾರಣವೇನು?? ಮಲೆನಾಡು, ಅರೆಮಲೆನಾಡು, ಕರಾವಳಿ ಪ್ರದೇಶ ಮತ್ತು ಬಯಲು ಸೀಮೆಯಲ್ಲಿ ಅಡಿಕೆ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೂ ಸಹ ಹಲವು ಹತ್ತು ಕಾರಣಗಳಿಂದ ಅಡಿಕೆ ಮರಗಳಿಂದ ಹೂ ಹಾಗೂ ವಿವಿಧ ಗಾತ್ರದ ಕಾಯಿಗಳು ಬಲಿಯುವುದಕ್ಕೆ ಮೊದಲೇ ಅಪಾರ ಸಂಖ್ಯೆಯಲ್ಲಿ ಉದುರುತ್ತವೆ. ನೀರು ಮತ್ತು ಪೋಷಕಾಂಶಗಳ ಕೊರತೆ, ಅಸಮರ್ಪಕ ನೀರಿನ ನಿರ್ವಹಣೆ, ಹವಮಾನ ವೈಪರೀತ್ಯ, ಕೀಟ ಮತ್ತು ರೋಗಗಳ ಬಾಧೆ ಹೂ ಮತ್ತು ಕಾಯಿ ಉದುರುವಿಕೆಗೆ ಮುಖ್ಯ ಕಾರಣಗಳಾಗಿರುತ್ತವೆ. ಕಾಯಿಗಳ ಉದುರುವಿಕೆಗೆ ಕಾರಣಗಳು…

